ಅಸ್ಸಲಾಮು
ಅಲೈಕುಂ,
ಕನ್ನಡಿಗರ ಅಚ್ಚುಮೆಚ್ಚಿನ ಅಂತರ್ಜಾಲ ಪತ್ರಿಕೆಯಾದ "ವಿಶ್ವ ಕನ್ನಡಿಗ ನ್ಯೂಸ್"
ಇದೀಗ ಐದನೇ ವರ್ಷಕ್ಕೆ ಪಾದಾರ್ಪಣೆ
ಮಾಡಿದೆ. ಅಲ್ ಹಮ್ದುಲಿಲ್ಲಾಹ್. ಗಲ್ಫ್ ರಾಜ್ಯಗಳಲ್ಲಿ ದುಡಿಯುವವರ
ಕಾರ್ಯನಿಬಿಡತೆ ಎಲ್ಲಾ ಅನಿವಾಸಿಗಳಿಗೂ ತಿಳಿದಿರುವ
ವಿಚಾರ. ಆದರೂ ತನ್ನ ದೇಶ,ರಾಜ್ಯ,ಹಾಗೂ ಸುತ್ತುಮುತ್ತಲಿನ
ಪರಿಸರದ ಮೇಲೆ ಪ್ರೇಮವನ್ನಿಟ್ಟು ಅದರಲ್ಲೂ
ರಾಜ್ಯಭಾಷೆಯಾದ ಕನ್ನಡದ ಉಳಿವಿಗಾಗಿ ನಿರಂತರ
ಪ್ರಯತ್ರಿಸುತ್ತಿರುವುದು ತುಂಬಾ ಸಂತೋಷದ ವಿಚಾರ.
ಪ್ರಧಾನ ಸಂಪಾದಕರಾದ ಸಿ.ಎಚ್.ಅಬ್ದುಲ್ ಹಮೀದ್ ರವರನ್ನು
ಎಷ್ಟು ಹೊಗಳಿದರೂ ಸಾಲದು. ಇವರು ರಫೀಕ್ ಕೋಲ್ಪೆ, ಇರ್ಶಾದ್ ಬೈರಿಕಟ್ಟೆ, ಅನ್ಸಾರ್ ಬೆಳ್ಳಾರೆ, ನಿತೀನ್
ರೈ ಕುಕ್ಕುವಳ್ಳಿ ಹಾಗೂ ನುರಿತ ಕನ್ನಡ ಪ್ರೇಮಿಗಳ ತಂಡವನ್ನು ತನ್ನ ಜೊತೆಗೆ ಇಟ್ಟುಕೊಂಡು ನಿರಂತರವಾಗಿ
ದೇಶ, ವಿದೇಶಗಳ ತಾಜಾ ಸುದ್ದಿಗಳನ್ನು ಆಯಾಯ ಸಮಯದಲ್ಲೇ ತಲುಪಿಸುವಲ್ಲಿ ವಿಶೇಷ ಪ್ರಯತ್ನವನ್ನು ಮಾಡುತ್ತಿದ್ದಾರೆ.
ಯಾವುದೇ ಹೆಸರು, ಖ್ಯಾತಿ, ಪ್ರಶಸ್ತಿಗಳ ಬೆನ್ನತ್ತಿ ಈ ಬಳಗ ಹೋಗದಿರುವುದು ತುಂಬಾ ಉತ್ತಮ ವಿಚಾರ.
ಅದೆಷ್ಟೋ ಬರಹ ಪ್ರೇಮಿಗಳಿಗೆ ಈ ಅಂತರ್ಜಾಲ ಪತ್ರಿಕೆಯು ಉತ್ತಮ
ವೇದಿಕೆಯಾಗಿದೆ. ಯುವ ಬರಹಗಾರರ ಹೊಸ ಹೊಸ ಬರಹಗಳನ್ನು ನಿರ್ಲಕ್ಷಿಸಲಿಲ್ಲ. ಬದಲಾಗಿ ಅದನ್ನು ತಿದ್ದಿ
ತೀಡಿ ಪ್ರಕಟಣಾ ಯೋಗ್ಯವನ್ನಾಗಿ ಮಾಡಿದ ಹೆಮ್ಮೆ ಇದಕ್ಕೆ ಸಲ್ಲಬೇಕು. ಇದರಿಂದ ಹೊಸ ಬರಹಗಾರರು ಇನ್ನಷ್ಟು
ಬರಹ ಪ್ರೇಮಿಗಳಾಗಲು ಸಹಕಾರಿಯಾಯಿತು. ಈ ಮೂಲಕ ಅದೆಷ್ಟೋ ಬರಹಗಾರರನ್ನು ಸೃಷ್ಟಿಸಿದ ಖ್ಯಾತಿ ಈ ಪತ್ರಿಕೆಗಿದೆ
ಎಂಬುವುದರಲ್ಲಿ ಎರಡು ಮಾತಿಲ್ಲ.
ಐದು ಸಂವತ್ಸರಗಳು ತುಂಬುತ್ತಿರುವ ಈ ಸಂಧರ್ಭದಲ್ಲಿ
ಎಲ್ಲಾ ಪತ್ರಿಕೆಯ ಬಳಗದವರಿಗೂ ನನ್ನ ಹೃದಾಯಾಂತರಾಳದ ಅಭಿನಂದನೆಗಳು. ಅಲ್ಲಾಹು ತಮ್ಮ ಈ ಸೇವೆಯನ್ನು
ಸ್ವೀಕರಿಸಲಿ. ಇನ್ನು ಮುಂದಕ್ಕೂ ಇನ್ನಷ್ಟು ಎತ್ತರಕ್ಕೆ ಬೆಳೆಯುವ ತೌಫೀಕ್ ನೀಡಲಿ. ಎಲ್ಲಾ ಸೇವೆಗಳನ್ನು
ಅಲ್ಲಾಹನ ಸಂಪ್ರೀತಿಗಾಗಿ ಮೀಸಲಿಡುವ ಗುಣವನ್ನು ಬೆಳೆಸಿಕೊಳ್ಳುವ ಹೃದಯವನ್ನು ನೀಡಲಿ (ಆಮೀನ್ ಯಾ ರಬ್ಬಲ್
ಆಲಮೀನ್)
ಮೌಲಾನಾ
ಅಬ್ದುಲ್ ಹಫೀಝ್ ಅಲ್ ಕಾಸಿಮೀ, ಕಾರ್ಕಳ.