ಚುನಾವಣೆ ಗಿಮಿಕ್
(ವಿಶ್ವ ಕನ್ನಡಿಗ ನ್ಯೂಸ್)ಈಗಾಗಲೇ ಚುನಾವಣೆಯ ಕಾವು ರಂಗೇರುತ್ತಿದೆ. ರಾಜಕಾರಣಿಗಳು ತಮ್ಮ ಬೇಳೆಯನ್ನು ಬೇಯಿಸಿಕೊಳ್ಳಲು ಶತಾಯ ಗತಾಯ ಪ್ರಯತ್ನವನ್ನು ಮಾಡುತ್ತಿದ್ದಾರೆ.
ಇನ್ನಿಲ್ಲದಂತೆ ಮತದಾರರನ್ನು ಸೆಳೆಯಲಿಕ್ಕಾಗಿ ಪ್ರತಿಯೊಬ್ಬರೂ ತನ್ನ ತನ್ನ ಕಸರತ್ತನ್ನು ಮಾಡುತ್ತಿರುವುದನ್ನು ನಿತ್ಯ ಗಮನಿಸುತ್ತಿದ್ದೇವೆ. ವಿಶೆಷತಃ ಮುಸ್ಲಿಮರ ಓಲೈಕೆಗಂತೂ ಕೊನೆಯೇ ಇಲ್ಲದಂತಾಗಿದೆ. ಜಾತ್ಯಾತೀತ ಎಂಬ ಪದ ಅದೆಂದೋ ಮಾಸಿ ಹೋಗಿತ್ತು.
ಈಗ ಅದಕ್ಕೆ ನೀರೆರಚಿ ಪುನರುಜ್ಜೀವಗೊಳಿಸಲಾಗುತ್ತಿದೆ. ಮುಸ್ಲಿಮರ ಬಗ್ಗೆ, ಅವರ ಮೇಲೆ ಆಗುವಂತಹ ದಮನಕಾರಿ ಶೋಷಣೆಯ ಬಗ್ಗೆ ಇನ್ನಿಲ್ಲದಂತೆ ಭಾಷಣ ಬಿಗಿಯಲಾಗುತ್ತಿದೆ.ಗುಜರಾತ್ ನಲ್ಲಿ ಅದಾಗಲೇ ಪಾಪದ ಕೊಡ ತುಂಬಿ ತುಳುಕುತ್ತಿದೆ. ಹೀಗಿರುವಾಗ ಮುಖ್ಯಮಂತ್ರಿಯೋರ್ವರು ನನಗೆ ನೋವಿದೆ ಎಂದು ಹೇಳಿದಾಕ್ಷಣ ಎಲ್ಲವನ್ನೂ ಮರೆತು ಬಿಡಲಿಕ್ಕೆ ಸಾಧ್ಯವಿದೆಯಾ?
ಇದೊಂದು ಚುನಾವಣೆ ಗಿಮಿಕ್ ಅಷ್ಡೇ. ಚುನಾವಣೆ ಆಗಿ ಕುರ್ಚಿ ಗಟ್ಟಿ ಆಗುವುದೇ ತಡ. ನಾನು ಅಂತಹ ಮಾತು ಹೇಳಲೇ ಇಲ್ಲ, ಇದು ಮಾಧ್ಯಮಗಳ ಸೃಷ್ಟಿ ಎಂದು ಹೇಳಲು ಇವರು ಹಿಂಜರಿಯುವುದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಯಾರು ನಿಷ್ಠಾವಂತರು ಯಾರು ಕಲುಷಿತರು ಎಂದು ಕಂಡುಹಿಡಿಯುವುದೇ ಯಕ್ಷ ಪ್ರಶ್ನೆ..?
-
No comments:
Post a Comment