Wednesday, 2 July 2014

ಉಪವಾಸ ಮತ್ತು ಅಲ್ಲಾಹನ ಜೊತೆಗಿನ ಸಂಭಂಧ : (ರಂಝಾನ್ ಸ್ಪೆಷಲ್)

(ವಿಶ್ವ ಕನ್ನಡಿಗ ನ್ಯೂಸ್) : ಉಪವಾಸ ಎಲ್ಲಾ ತರಹದ ಕಾಪಟ್ಯತೆಯಿಂದ ಮುಕ್ತವಾದ ಇಬಾದತ್(ಪ್ರಾರ್ಥನೆ) ಆಗಿದೆ. ನಮಾಝ್, ಹಜ್, ಝಿಕ್ರ್ ಇದು ಶಾರೀರಿಕವಾಗಿ ಮಾಡುವಂತಹ ಪ್ರಾರ್ಥನೆಗಳಾಗಿವೆ. ಝಕಾತ್ ಇದು ಸಿರಿವಂತರ ಮೂಲಕ ಬಡವರು ಪಡೆಯುವಂತಹ ಆರ್ಥಿಕ ಪ್ರಯೋಜನಗಳು. ಇದನ್ನು ನಾವು ಕಣ್ಣಾರೆ ನೋಡಬಹುದು. ಆದರೆ ಉಪವಾಸ, ಇದರಲ್ಲಿ ಒಬ್ಬ ವ್ಯಕ್ತಿಯು ಅಲ್ಲಾಹನ ಸಂಪ್ರೀತಿಗಾಗಿ ಅನ್ನಪಾನೀಯಗಳನ್ನು ತೊರೆದು ದೈಹಿಕವಾದ ಎಲ್ಲಾ ಸುಖಗಳಿಂದ ತನ್ನನ್ನು ದೂರವಿರಿಸುತ್ತಾನೆ. ನಿಜವಾಗಿಯೂ ಇದರಲ್ಲಿ ಉಪವಾಸದಿಂದಿರುವ ವ್ಯಕ್ತಿಯು ಹಸಿವಿನಿಂದ ಇದ್ದಾನೋ ಅಥವಾ ಇಲ್ಲವೋ ಎಂದು ಸ್ವಷ್ಟವಾಗಿ ಹೇಳಲು ಸಾಧ್ಯವಿಲ್ಲ. ಅಲ್ಲಾಹನನ್ನು ವಿಶೇಷವಾಗಿ ಭಯಪಟ್ಟು ಅವನು ಈ ತ್ಯಾಗಕ್ಕೆ ಅಣಿಯಾಗುತ್ತಾನೆ. ಇದರಿಂದಿ ನೇರವಾಗಿ ಅವನ ಸಂಭಂಧವು ಅಲ್ಲಾಹನ ಜೊತೆಗಿರುತ್ತದೆ.
ಇದಕ್ಕಾಗಿಯೇ, ಉಪವಾಸದ ಮಹತ್ವವನ್ನು ವಿವರಿಸುತ್ತಾ ಪ್ರವಾದಿ ಮುಹಮ್ಮದ್(ಸ್ವ.ಸ್ವ)ರವರು ಹೇಳುತ್ತಾರೆ, ಅಲ್ಲಾಹನು ಹೇಳುತ್ತಾನೆ, ಉಪವಾಸದ ಹೊರತು ಎಲ್ಲಾ ಪುಣ್ಯ ಕಾರ್ಯಗಳು ಅದನ್ನು ಮಾಡುವ ವ್ಯಕ್ತಿಗಾಗಿದೆ ಆದರೆ ಉಪವಾಸ ಹಾಗಲ್ಲ, ಇದು ನನಗಾಗಿದೆ ಹಾಗೂ ಇದರ ಪ್ರತಿಫಲವನ್ನು ನಾನೇ ಸ್ವತಃ ನೀಡುತ್ತೇನೆ( ಸಹೀಹ್ ಬುಖಾರಿ:). ಉಪವಾಸವನ್ನು ಅಲ್ಲಾಹನು ತನ್ನ ಜೊತೆಗೆ ಸಂಭಂಧಿಸಿದಾಗ ಇದರಲ್ಲಿ ತೋರಿಕೆಯ ಪ್ರಶ್ನೆಯೇ ಉಧ್ಬವಿಸುವುದಿಲ್ಲ. 


ಈ ಹದೀಸ್ ನ ಪ್ರಕಾರ ಒಂದು ಮಾತಂತು ನಮಗೆ ತಿಳಿಯುತ್ತದೆ, ಎಲ್ಲಾ ಇಬಾದತ್(ಪುಣ್ಯ ಕಾರ್ಯ) ಗಳ ಪ್ರತಿಫಲವನ್ನು ಅಲ್ಲಾಹನು ಮಲಾಯಿಕ್ (ದೇವದೂತರು) ಗಳ ಮುಖಾಂತರ ನೀಡುವನು ಆದರೆ ಉಪವಾಸದ ಪ್ರತಿಫಲವನ್ನು ಅಲ್ಲಾಹನು ಸ್ವತಃ ನೀಡುವನು. ತನ್ಮೂಲಕ ಅಲ್ಲಾಹನು ಉಪವಾಸವನ್ನು ಇಡುವ ತನ್ನ ದಾಸರನ್ನು ವಿಶೇಷವಾಗಿ ಗೌರವಿಸಿದ್ದಾನೆ. ನಿಜವಾಗಿಯೂ ಇದು ಒಂದು ವ್ಯಕ್ತಿಗೆ ಸಿಗುವಂತಹ ಮಹಾನ್ ಗೌರವವಾಗಿದೆ. ಸ್ವತಃ ಅಲ್ಲಾಹನೇ ತನ್ನ ವತಿಯಿಂದ ನೀಡುವಂತಹ ಪ್ರತಿಫಲಗಳು ಯಾವ ತರಹದ್ದಾಗಿರಬಹುದು ಇದನ್ನು ಊಹಿಸಲೂ ಅಸಾಧ್ಯ.

No comments:

Post a Comment